ವೇತನ-ಭತ್ಯೆ ಪಡೆಯದ ಏಕೈಕ ರಾಜ್ಯಸಭಾ ಸದಸ್ಯ ರಂಜನ್ ಗೊಗೋಯ್ (Ranjan Gogoi)

ವೇತನ-ಭತ್ಯೆ ಪಡೆಯದ ಏಕೈಕ ರಾಜ್ಯಸಭಾ ಸದಸ್ಯ ರಂಜನ್ ಗೊಗೋಯ್ (Ranjan Gogoi)

Ranjan Gogoi : ನಾಮನಿರ್ದೇಶನದ ಮೂಲಕ ರಾಜ್ಯಸಭಾ ಸದಸ್ಯರಾಗಿರುವ ಮಾಜಿ ಸಿಜೆಐ ರಂಜನ್ ಗೊಗೋಯ್ ಅವರು ವೇತನ ಅಥವಾ ಭತ್ಯೆಗಳನ್ನು ಪಡೆಯುತ್ತಿಲ್ಲ! ಕಳೆದ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿತ್ತು. ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು 2020ರ ಮಾರ್ಚ್ 24ರಂದು ರಾಜ್ಯಸಭೆಯ ಸೆಕ್ರೆಟರಿ ಜನರಲ್‍ಗೆ ಪತ್ರಬರೆದ ಅವರು, ವೇತನ ಮತ್ತು ಭತ್ಯೆಗಳು ತಮಗೆ ಬೇಡ ಎಂದು ಔಪಚಾರಿಕವಾಗಿ ತಿಳಿಸಿದ್ದಾರೆ. ಈ ರೀತಿ ವೇತನ ಮತ್ತು ಭತ್ಯೆಗಳನ್ನು ಪಡೆಯದೇ ಇರುವ ಏಕೈಕ ಸದಸ್ಯರೆಂದರೆ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರೇ.

ಪತ್ರದಲ್ಲೇನಿದೆ..?
ರಾಜ್ಯಸಭಾ ಸದಸ್ಯನಾಗಿ ನನಗೆ ಸಿಗಬಹುದಾದ ವೇತನ ಮತ್ತು ಭತ್ಯೆ(ಪ್ರಯಾಣ ಮತ್ತು ವಸತಿ ಭತ್ಯೆ ಹೊರತಾಗಿ)ಯ ಪ್ರಯೋಜನವನ್ನು ಪಡೆಯುವುದಿಲ್ಲ. ಇದರ ಬದಲು ನಾನು ಮಾಜಿ ಸಿಜೆಐ ಆಗಿ ನನಗೆ ಸಿಗಬಹುದಾದ ನಿವೃತ್ತಿ ಪ್ರಯೋಜನಗಳನ್ನು ಪಡೆಯುತ್ತೇನೆ ಎಂದು ನ್ಯಾಯಮೂರ್ತಿ ಗೊಗೋಯ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಭತ್ಯೆ ಮಾತ್ರ ಪಡೆಯುವ ಸದಸ್ಯರು:
ಮನೋಜ್ ಝಾ – ದೆಹಲಿ ವಿಶ್ವವಿದ್ಯಾಲಯದಲ್ಲಿ ಪಿಎಚ್‍ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕನಾಗಿದ್ದು ಅಲ್ಲಿ ವೇತನ ಪಡೆಯತ್ತಿರುವ ಕಾರಣ ಇಲ್ಲಿ ಪಡೆಯುತ್ತಿಲ್ಲ. ಭತ್ಯೆಗಳನ್ನು ಮಾತ್ರ ಪಡೆಯುತ್ತಿದ್ದಾರೆ. ರಾಕೇಶ್ ಸಿನ್ಹಾ – ದೆಹಲಿ ವಿಶ್ವವಿದ್ಯಾಲಯದಲ್ಲಿ ಬೋಧನೆ ಮಾಡುತ್ತಿದ್ದು, ಅಲ್ಲಿಂದಲೇ ವೇತನ ಪಡೆಯುತ್ತಿದ್ದಾರೆ. ಭತ್ಯೆ ರಾಜ್ಯಸಭೆಯಿಂದ ಪಡೆಯುತ್ತಿದ್ದಾರೆ.

Comments

No comments yet. Why don’t you start the discussion?

    Leave a Reply

    Your email address will not be published. Required fields are marked *